13/12/2025
IMG-20250709-WA0004

ಬೆಳಗಾವಿ-09 : ಮಹಾನಗರ ಪಾಲಿಕೆ ಬೆಳಗಾವಿ ಯಿಂದ ಸಂಬಂಧವಿರದ ದಾಖಲಾತಿ ಬೇಡಿಕೆಗಳನ್ನು ಇಡದೇ ಕಡಿಮೆ ದಾಖಲಾತಿಗಳನ್ನು ಪಡೆದು ಇ – ಆಸ್ತಿ ನೋಂದಣಿ ಮಾಡಿಕೊಳ್ಳಬೇಕೆಂದು ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ವಿಜಯ ಪಾಟೀಲ್ ಅವರು ಬೆಳಗಾವಿ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.ಸಿ ಟಿ ಎಸ್ ಇದ್ದವರಿಗೆ ಇ- ಆಸ್ತಿ ನೀಡಿ, ನೂರಾರು ವರ್ಷಗಳ ಕಾಲ ಹಳೆಯದಾದ ಸಾಲ ಬಾಧ್ಯತಾ ಪ್ರಮಾಣ ಪತ್ರವನ್ನು ನೀಡುವುದು ಕಷ್ಟಕರವಾಗಿದೆ. ಸಾಲ ಬಾಧ್ಯತಾ ಪ್ರಮಾಣ ಪತ್ರಕ್ಕೂ ಮತ್ತು ಇ- ಆಸ್ತಿಗೆ ಯಾವುದೇ ರೀತಿಯ ಸಂಬಂಧ ವಿರುವುದಿಲ್ಲ ಎಂದು ಹೇಳಿದರು.

ಸಿ ಟಿ ಎಸ್ ಆಧಾರದ ಮೇಲೆ ಮನೆ ಮನೆಗೆ ತೆರಳಿ ಇ- ಆಸ್ತಿ ನೋಂದಣಿ ಮಾಡಿಕೊಳ್ಳುವಂತೆ ಆಗ್ರಹಿಸಿ. ಬಿ- ಖಾತಾ ನೋಂದಣಿ ಕುರಿತು ಜನ ಸಾಮಾನ್ಯರಿಗೆ ಸ್ಪಷ್ಟತೇ ನೀಡಬೇಕು. ಜಿಲ್ಲಾಧಿಕಾರಿಗಳು ಮತ್ತು ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತರು ಇದರ ಬಗ್ಗೆ ಮಾಹಿತಿ ನೀಡಲು ಮಾಧ್ಯಮಗೋಷ್ಠಿ ನಡೆಸಬೇಕು ಎಂದು ತಿಳಿಸಿದರು.

ಇ – ಆಸ್ತಿ ಮಹತ್ವದ ಪ್ರಕ್ರಿಯೆಯಾಗಿದ್ದು, ಬೆಳಗಾವಿಯಲ್ಲಿ ಇ- ಆಸ್ತಿಗೆ ಅಗತ್ಯವಿರುವ ದಾಖಲೆಗಳು ಬೆಂಗಳೂರಿನ ಬಿಬಿಎಂಪಿಯೊಂದಿಗೆ ಹೊಂದಿಕೆಯಾಗಬೇಕು. ಬೆಂಗಳೂರಿನಲ್ಲಿ ಕೇವಲ ನಾಲ್ಕು ದಾಖಲೆಗಳನ್ನು ಕೇಳುತ್ತಿರುವಾಗ ಬೆಳಗಾವಿಯಲ್ಲಿ ಹತ್ತಾರು ದಾಖಲೆಗಳನ್ನು ಕೇಳುತ್ತಿರುವುದರಿಂದ ಜನರಿಗೆ ತೊಂದರೆಯಾಗುತ್ತಿದೆ ಎಂದು ಮಹಾನಗರ ಪಾಲಿಕೆ ವಿರುದ್ಧ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷರು ಅಸಮಾಧಾನ ವ್ಯಕ್ತ ಪಡಿಸಿದರು.

ಈ ಪತ್ರಿಕಾಗೋಷ್ಠಿ ಯಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯದರ್ಶಿಗಳಾದ ಪವನ್ ಕುಮಾರ್, ದಕ್ಷಿಣ ಜಿಲ್ಲಾಧ್ಯಕ್ಷರಾದ ಸುದೀಪ್ ನೇಸರಕರ, ಯುವ ಘಟಕದ ಅಧ್ಯಕ್ಷರಾದ ಜುನೇದ್, ಸೋನಿಯಾ ಡಿಸೋಜಾ ಸೇರಿದಂತೆ ಇತರರು ಹಾಜರಿದ್ದರು.

error: Content is protected !!