
‘ದೀಪಕ ಬಿಳ್ಳೂರ’ ಅವರಿಗೆ ಕಸಾಪ ದತ್ತಿ ಪ್ರಶಸ್ತಿ.
ಕನ್ನಡ ಸಾಹಿತ್ಯ ಪರಿಷತ್ತಿನ ೨೦೨೪ ನೇ ಸಾಲಿನ “ಪ್ರೊ. ಡಿ.ಸಿ. ಅನಂತಸ್ವಾಮಿ ದತ್ತಿ” ಪ್ರಶಸ್ತಿಗೆ ದೀಪಕ ಬಿಳ್ಳೂರ ಅವರು ಬರೆದಂತಹ ಕವನ ಸಂಕಲನ ‘ದೀಪಗಳು-ಬೆಳಕಿನತ್ತ ಪಯಣ’ ಆಯ್ಕೆಯಾಗಿದೆ. ೨೦೨೪ರ ಜನವರಿಯಿಂದ ಡಿಸೆಂಬರ್ ವರೆಗೆ ಪ್ರಕಟಗೊಂಡ ಕೃತಿಗಳನ್ನು ಪರಿಗಣಿಸಿ ಈ ಆಯ್ಕೆ ಮಾಡಲಾಗಿದೆ. ದೀಪಕ ಬಿಳ್ಳೂರ ಅವರಿಗೆ ಈ ಗೌರವ ಲಭಿಸಿದೆ.
