ಬೆಳಗಾವಿ-08: ಇಂದಿನಿಂದ ೧೦ ದಿನಗಳ ಕಾಲ ಚಳಿಗಾಲ ವಿಧಾನಮಂಡಲ ಅಧಿವೇಶನ ಪ್ರಾರಂಭವಾಗಲಿದೆ. ಅಧಿವೇಶನಕ್ಕೆ 21 ಕೋಟಿ ರೂ ಅಂದಾಜುಪಟ್ಟಿಯನ್ನು ಜಿಲ್ಲಾಡಳಿತ ಸಲ್ಲಿಸಿದ್ದು ಈ ಖರ್ಚು, ವೆಚ್ಚದ ಹಲವರ ಹುಬ್ಬೇರುವಂತೆ ಮಾಡಿದೆ.
ಕಳೆದ ವರ್ಷ ರಾಜ್ಯ ಸರಕಾರ 15.30 ಕೋಟಿ ರೂ.ಗಳನ್ನು ಖರ್ಚು ಮಾಡಿತ್ತು, ಇದು ಈ ವರ್ಷ 5.70 ಕೋಟಿ ರೂ.ಗಳ ಹೆಚ್ಚಳವಾಗಿದೆ. 2012 ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನಗಳಿಗಾಗಿ ರಾಜ್ಯ ಸರಕಾರವು ಒಟ್ಟು 169.6 ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ಈ ಖರ್ಚು ಮತ್ತು ವೆಚ್ಚಗಳು ಇದೀಗ ಸಾರ್ವಜನಿಕ ಹಾಗೂ ರಾಜಕೀಯ ಚರ್ಚೆಗೆ ಕಾರಣವಾಗಿದೆ ಎನ್ನಲಾಗಿದೆ.
ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಪ್ರಮುಖ ಉದ್ದೇಶ ಉತ್ತರ ಕರ್ನಾಟಕದಲ್ಲಿ ಅಭಿವೃದ್ಧಿಯನ್ನು ಉತ್ತೇಜಿಸುವುದು, ಆಡಳಿತ ವಿಕೇಂದ್ರೀಕರಣ ಮತ್ತು ಇಲಾಖಾ ಸಮತೋಲನವನ್ನು ಖಚಿತಪಡಿಸಿಕೊಳ್ಳುವುದಾಗಿದ್ದರೂ, ಈ ಗುರಿಗಳನ್ನು ಎಷ್ಟು ಪರಿಣಾಮಕಾರಿಯಾಗಿ ಪೂರೈಸಲಾಗುತ್ತಿದೆ ಎಂಬ ಪ್ರಶ್ನೆಗಳು ಜನತೆಯನ್ನು ಕಾಡುತ್ತಿದೆ. ವೆಚ್ಚವು ಪ್ರಯಾಣ, ವಸತಿ, ಭದ್ರತೆ, ಅತಿಥಿ ನಿರ್ವಹಣೆ, ತಾಂತ್ರಿಕ ಬೆಂಬಲ, ವಿಶೇಷ ಸಿಬ್ಬಂದಿಯ ನಿಯೋಜನೆ, ಸಾರಿಗೆ ಮತ್ತು ಸುವರ್ಣ ಸೌಧದ ನಿರ್ವಹಣೆ ಸೇರಿದಂತೆ ಇತರೆ ವೆಚ್ಚಗಳನ್ನು ಒಳಗೊಂಡಿದ್ದು, ಹೆಚ್ಚುವರಿಯಾಗಿ ಸಂಪುಟ ಸಭೆಗಳು, ವಿಶೇಷ ಶಾಸಕಾಂಗ ಕಾರ್ಯಸ್ಥಳಗಳು, ಮಾಧ್ಯಮ ಸೌಲಭ್ಯಗಳು, ಪೊಲೀಸ್ ವ್ಯವಸ್ಥೆಗಳು, ಸಾರಿಗೆ ವ್ಯವಸ್ಥೆ ಮತ್ತು ಪ್ರೋಟೋಕಾಲ್ ನಿರ್ವಹಣೆಗೆ ಹಣವನ್ನು ಹಂಚಲಾಗುತ್ತದೆ.
ಈ ಭಾರೀ ಖರ್ಚು ಮತ್ತು ವೆಚ್ಚಗಳ ಹೊರತಾಗಿಯೂ ನಿರೀಕ್ಷೆಯಂತೆ ಕಲಾಪಗಳು ನಡೆಯುವುದಿಲ್ಲ. ಹೀಗಾಗಿ ಅಧಿವೇಶನವನ್ನು ನಡೆಸುವ ದಕ್ಷತೆ ಮತ್ತು ಅಗತ್ಯತೆಯ ಕುರಿತು ಚರ್ಚೆಗಳು ಆರಂಭವಾಗಿವೆ.
ಸರಕಾರದ ವಿರುದ್ದ ಪ್ರತಿಭಟನೆ:
ಅಲ್ಲದೆ ರಾಜ್ಯ ಸರಕಾರದ ಧೋರಣೆಯ ವಿರುದ್ದ ವಿವಿಧ ಸಂಘಟನೆಗಳು, ರೈತರು, ಮಠಾಧೀಶರುಗಳು, ಬಿಜೆಪಿ-ಜೆಡಿಎಸ್ ಸೇರಿ ಅಧಿವೇಶನದಲ್ಲಿ ಸರಕಾರವನ್ನು ಕಟ್ಟಿ ಹಾಕುವುದಕ್ಕೆ ಸಿದ್ದತೆ ಮಾಡಿಕೊಂಡಿವೆ. ಒಂದು ಕಡೆ ರಾಜ್ಯದ ಯಾವುದೇ ಒಂದೇ ಒಂದು ಭಾಗದಲ್ಲಿ ನಯಾ ಪೈಸೆ ಅಭಿವೃಧಿ ಯಾಗಿಲ್ಲ ಎಂದು ವಿಪಕ್ಷಗಳು ಕೆಂಡಕಾರಿದರೆ ಇನ್ನೊಂದು ಕಡೆ. ರೈತರಿಗೆ ಯಾಗಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತಲಿವೆ, ಮತ್ತೊಂದು ಕಡೆ ಕಳೆದ ಬಾರಿ ಪಂಚಮಸಾಲಿಗರು ತಮ್ಮ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡುತ್ತಿದ್ದ ವೇಳೆ ಸರಕಾರ ಪೊಲೀಸರಿಂದ ಲಾಠಿ ಚಾರ್ಜ್ ಮಾಡಿಸಿದೆ.
ಇದರ ವಿರುದ್ದವಾಗಿ ಡಿಸೆಂಬರ್ ೧೦ ರಂದು ಸರಕಾರದ ವಿರುದ್ದ ಪಂಚಮಸಾಲಿ ಮಿಸಲಾತಿಗಾಗಿ ಆಗ್ರಹಿಸಿ ಬಸವ ಜಯಮೃತ್ಯುಂಜಯ ಸ್ವಾಮೀಜಿಗಳ ನೇತ್ರತ್ವದಲ್ಲಿ ಬಾಯಿಗೆ, ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಮೌನ ಪ್ರತಿಭಟನೆ ನಡೆಸಿದ್ದರೆ. ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಸಂಘಟನೆಗಳು ಸರಕಾರದ ವಿರುದ ಪ್ರತಿಭಟನೆ ನಡೆಸಲಿವೆ. ಇತ್ತ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ನಾಯಕರು ಮಹಾರಾಷ್ಟ್ರದ ನಾಯಕರೊಂದಿಗೆ ಸರಕಾರ ಹಾಗೂ ಅಧಿವೇಶನದ ವಿರುದ್ದ ಮಹಾಮೇಳಾವ್ ನಡೆಸಲಿದ್ದಾರೆ.
ಒಟ್ಟನಲ್ಲಿ ಈ ಭಾರಿ ಕಾಂಗ್ರೆಸ್ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿ, ಕಟ್ಟಿಹಾಕುವುದಕ್ಕೆ ಸಿದ್ದಗೊಂಡಿವೆ. ಈ ಎಲ್ಲ ಸಮಸ್ಯೆಗಳನ್ನು ಸರಕಾರ ಯಾವ ರೀತಿ ನಿಭಾಯಿಸುತ್ತಾ ಅಥವಾ ಸಮರ್ಥಿಸಿಕೊಳ್ಳುತ್ತಾ ಎಂಬುವುದು ನೋಡಬೇಕಾಗಿದೆ.
