11/12/2025
IMG-20250421-WA0050

ಬೆಳಗಾವಿ-21:ತಾಲೂಕಿನ ಶಿಂದೋಳಿ ಗ್ರಾಮದಲ್ಲಿ ಶ್ರೀ ಮಹಾಲಕ್ಷ್ಮಿ, ಶ್ರೀ ದುರ್ಗಾ ಮತ್ತು ಶ್ರೀ ಮಸನೈ ದೇವಿಯ ಯಾತ್ರಾ ಮಹೋತ್ಸವವು ಇದೇ ಏಪ್ರಿಲ್ 22ರಿಂದ 30ರವರೆಗೆ ವಿಜೃಂಭಣೆಯಿಂದ ನಡೆಯಲಿದೆ. ಈ ಉತ್ಸವವನ್ನು ಯಶಸ್ವಿಗೊಳಿಸಲು ಯಾತ್ರಾ ಸಮಿತಿಯು ಶ್ರದ್ಧೆಯಿಂದ ಸಿದ್ಧತೆಗಳನ್ನು ಮಾಡಿದೆ ಎಂದು ಕಮಿಟಿಯ ಸದಸ್ಯರು ತಿಳಿಸಿದ್ದಾರೆ.

IMG 20250421 WA0052 - IMG 20250421 WA0052

ಸುದ್ಧಿ ಗೋಷ್ಠಿಯಲ್ಲಿ ಅವರು ಮಾತನಾಡುತ್ತಾ, “ಒಂಬತ್ತು ದಿನಗಳ ಈ ಧಾರ್ಮಿಕ ಉತ್ಸವವು ಭಕ್ತರಲ್ಲಿ ಭಕ್ತಿ ಮತ್ತು ಸಂಸ್ಕೃತಿ ಅರಳಿಸಲು ನಿದರ್ಶನವಾಗಲಿದೆ” ಎಂದು ಹೇಳಿದರು.

ಯಾತ್ರೆಯ ಮೊದಲ ದಿನ (ಏಪ್ರಿಲ್ 22):
ಪರಮಪೂಜ್ಯ ಬಡೇಕೊಳ್ಳಮಠ ತಾರಿಹಾಳದ ಶ್ರೀ ನಾಗಪ್ಪ ಮಹಾಸ್ವಾಮೀಜಿ ಮತ್ತು ಶರಣಮಟ್ಟಿ ಶ್ರೀಗಳ ನೇತೃತ್ವದಲ್ಲಿ ಯಾತ್ರೆಯ ಆರಂಭವಾಗಲಿದೆ. ಇದೇ ದಿನ ಬೆಳಿಗ್ಗೆ 9 ಗಂಟೆಗೆ ಶ್ರೀ ಮಹಾಲಕ್ಷ್ಮಿ ದೇವಾಲಯವನ್ನು ಶ್ರೀ ರುದ್ರಯ್ಯ ಮಹಾಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಉದ್ಘಾಟಿಸಲಾಗುವುದು. ಉದ್ಘಾಟಕರಾಗಿ ಸಂಸದ ಜಗದೀಶ ಶೆಟ್ಟರ್ ಉಪಸ್ಥಿತರಿರುವರು.

ಮುಖ್ಯ ಕಾರ್ಯಕ್ರಮಗಳು:
ದೇವಿಯ ಉಡಿ ತುಂಬುವ ಕಾರ್ಯಕ್ರಮ
ಸಂಜೆ 4 ಗಂಟೆಗೆ ದೇವಿಯ ರಥೋತ್ಸವ

ಏಪ್ರಿಲ್ 23 ರಂದು ಬೆಳಿಗ್ಗೆ 8 ಗಂಟೆಗೆ ಅಧಿಕೃತ ರಥೋತ್ಸವ ಆರಂಭ

ಉದ್ಘಾಟನೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮತ್ತು ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಆಗಮಿಸುತ್ತಾರೆ

ಧಾರ್ಮಿಕ ಮುಖಂಡರಿಂದ ಆಶೀರ್ವಚನ ಮತ್ತು ಸಾನ್ನಿಧ್ಯ

*ಪ್ರತಿದಿನ ವಿಶೇಷ ಪೂಜೆಗಳು ಮತ್ತು ಮನರಂಜನಾ ಕಾರ್ಯಕ್ರಮಗಳು:*
ಏಪ್ರಿಲ್ 24 ರಂದು ಗ್ರಾಮಸ್ಥರು ಭಕ್ತಿಯಿಂದ ಉಡಿ ತುಂಬುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಏಪ್ರಿಲ್ 25 ರಂದು ಶ್ರೀ ದುರ್ಗಾದೇವಿ ಮತ್ತು ಮಸನೈ ದೇವಿಯ ಓಟಿ ತುಂಬುವ ಪವಿತ್ರ ಕಾರ್ಯಕ್ರಮ ನಡೆಯಲಿದ್ದು, ಸಚಿವ ಸತೀಶ್ ಜಾರಕಿಹೊಳಿ ವಿಶೇಷ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಏಪ್ರಿಲ್ 26ರಿಂದ 29ರವರೆಗೆ ನಾಟಕ, ಭಜನೆಗಳು ಮತ್ತು ಓಟಿ ಭರಣೆಯಂತಹ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ.

*ಮಹಾಉತ್ಸವದ ಸಮಾಪನೆ (ಏಪ್ರಿಲ್ 30):*
ಅಂತಿಮ ದಿನವಾದ ಬುಧವಾರ, ಶ್ರೀ ಮಹಾಲಕ್ಷ್ಮಿ ದೇವಿಯನ್ನು ಗೌರವಿಸಲು “ಸಿಮೋಲ್ಲಂಘನ” ಎಂಬ ಶ್ರದ್ಧೆಯ ಧಾರ್ಮಿಕ ನೃತ್ಯ ಪ್ರದರ್ಶನದ ಮೂಲಕ ಉತ್ಸವಕ್ಕೆ ಸಮರ್ಪಕ ಅಂತ್ಯ ದೊರೆಯಲಿದೆ.

ಮಾಜಿ ಸಚಿವ ರಮೇಶ ಜಾರಕಿಹೊಳಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮಾಜಿ ಸಂಸದೆ ಮಂಗಳ ಅಂಗಡಿ, ಶಾಸಕರಾದ ಅಭಯ ಪಾಟೀಲ, ಲಖನ್ ಜಾರಕಿಹೊಳಿ, ಹಾಗೂ ಹಿರಿಯ ಅಧಿಕಾರಿಗಳು.ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.

*ಸನ್ಮಾನ:*
ಈಶ್ವರಪ್ಪ ಗಡೇದ್, ಹೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ವಿನೋದ್ ಕರೂರ್ ಮತ್ತು ಮಾರಿಹಾಳ ಸಿಪಿಐ ಮಂಜುನಾಥ್ ನಾಯಕ್ ಅವರನ್ನು ಸಾರ್ವಜನಿಕವಾಗಿ ಗೌರವಿಸಲಾಗುವುದು.

ಈ ಪತ್ರಿಕಾಗೋಷ್ಠಿಯಲ್ಲಿ ಶಿಂದೋಳಿ ಗ್ರಾಮದ ಹಿರಿಯರು, ಯಾತ್ರಾ ಸಮಿತಿಯ ಪದಾಧಿಕಾರಿಗಳು ಮತ್ತು ಭಕ್ತರು ಭಾಗವಹಿಸಿದ್ದರು. ಈ ಯಾತ್ರೆ ಗ್ರಾಮದಲ್ಲಿ ಧಾರ್ಮಿಕತೆ, ಸಂಸ್ಕೃತಿಯ ಸಜೀವ ಉದಾಹರಣೆಯಾಗಿ ಅರ್ಥಪೂರ್ಣವಾಗಿ ನೆಡೆಯಲಿದೆ.

error: Content is protected !!