ಮೂಡಲಗಿ-೨೭:’ಶಿವಧ್ಯಾನದ ಮೂಲಕ ಮನುಷ್ಯನಲ್ಲಿಯ ಅಂಧಕಾರ, ಆಹಂಕಾರ ಮತ್ತು ವಿಕಾರಾದಿಗಳನ್ನು ದೂರು ಮಾಡುವ ಮೂಲಕ ಶಿವರಾತ್ರಿಯು ಉಂತಿ, ನೆಮ್ಮದಿಯನ್ನು ಪ್ರಾಪ್ತಿಗೊಳಿಸುತ್ತದೆ” ಎಂದು ಪ್ರಜಾಪಿತ ಈಶ್ವರಿ ವಿಶ್ವವಿದ್ಯಾಲಯದ ಮೂಡಲಗಿ ಕೇಂದ್ರದ ಸಂಚಾಲಕರಾದ ರೇಖಾಅಕ್ಕನವರು ಹೇಳಿದರು.
ಪಟ್ಟಣದಲ್ಲಿನ ವಿಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಕೇಂದ್ರದಲ್ಲಿ ಬುಧವಾರ ಆಚರಿಸಿದ ಮಹಾಶಿವರಾತ್ರಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಶಿವರಾತ್ರಿ ದಿನ ಉಪವಾಸ, ಧ್ಯಾನ ಮತ್ತು ಪ್ರಾರ್ಥನೆಗಳಿಂದ ಶಿವನ ಅನುಗಹ ದೊರೆಯುವುದು ಎಂದರು.
ಕಲ್ಯಾಣಕಾರಿ, ಮಂಗಳಕಾರಿ ಮತ್ತು ಶುಭಕಾರಿಯಾಗಿರುವ ಶಿವನು ನಿರಾಕಾರನಾಗಿದ್ದಾನೆ. ಶಿವನು ಚೈತನ್ಯ ಸ್ವರೂಪಿಯಾಗಿದ್ದರಿಂದ ಜಗತ್ತು ಸೃಷ್ಟಿಯಾಗಿದೆ ವಿಕರ್ಮಗಳಿಗೆ ಬಲಿಯಾಗದೆ, ಪರಸ್ಪರ ಪ್ರೀತಿ, ವಿಶ್ವಾಸದಿಂದ ಬದುಕನ್ನು ಸುಂದರಗೊಳಿಸಿ ಕೊಳ್ಳಬೇಕು ಎಂದರು.
ಸವಿತಾ ಅಕ್ಕನವರು, ವೈಬಿ ಕುಲಿಗೋಡಿ, ಈರಪ್ಪ ಹಂದಿಗುಂದ, ಮಲ್ಲಿಕಾಜುನ ಎಮ್ಮಿಶೆಟ್ಟರ , ಗುರುಲಿಂಗಪ್ಪ ಶೀಲವಂತ, ಸುಮೀತ್ರಾ ಸೋನವಾಲ್ಕರ್, ಬಾಲಶೇಖರ ಬಂದಿ, ಶಿವಬಸು ಗುರುವ, ಗೋಪಾಲ ಗಂಗರಡ್ಡಿ, ತುಂಗವ್ವ ಸೋನವಾಲ್ಕರ, ರಜನಿ ಬಂದಿ, ಬಸವ್ವ ಮದಗನ್ನವರ, ಕಮಲಾ ಶೀಲವಂತ, ಯಲವ್ವ ನೇಮಗೌಡರ, ಅನ್ನಪೂರ್ಣ ತುಪ್ಪದ ಮತ್ತಿತರರು ಉಪಸ್ಥಿತರಿದ್ದರು.
ಶಿವನ ನಾಮಸ್ಮರಣೆಯೊಂದಿಗೆ ಧ್ವಜಾರೋಹನ ಜರುಗಿತು. ಸೇರಿದ ಭಕ್ತರೆಲ್ಲರು ಸಾತ್ವಿಕ ಆಹಾರ ಸೇವಿಸಿದರು.
