12/12/2025
IMG-20240809-WA0010

ಬೆಳಗಾವಿ-09: ತಾಲ್ಲೂಕಿನ ನಾವಗೆ ಗ್ರಾಮದಲ್ಲಿರುವ ಸ್ನೇಹಂ ಟೇಪಿಂಗ್ ಸಲ್ಯೂಷನ್ಸ್ ಪ್ರೈ.ಲಿ. ಕಾರ್ಖಾನೆಯಲ್ಲಿ ಇತ್ತೀಚೆಗೆ ನಡೆದ ಅಗ್ನಿ ದುರಂತದಲ್ಲಿ ‌ಮೃತಪಟ್ಟ ಕಾರ್ಮಿಕನ ಕುಟುಂಬಕ್ಕೆ ಕಾರ್ಖಾನೆಯು 18 ಲಕ್ಷ ರೂಪಾ‌ಯಿ ಪರಿಹಾರವನ್ನು ನೀಡಲಿದೆ.

ದುರಂತದಲ್ಲಿ ಮೃತಪಟ್ಟಿರುವ ಯಲ್ಲಗೌಡ ಸಣ್ಣ ಯಲ್ಲಪ್ಪ ಗೌಂಡ್ಯಾಗೋಳ ಇವರ ತಂದೆ ಹಾಗೂ ತಾಯಿಯ ಹೆಸರಿನಲ್ಲಿ ತಲಾ 9 ಲಕ್ಷ ರೂಪಾಯಿ ಮೊತ್ತದ ಚೆಕ್‌ಗಳನ್ನು ಕಾರ್ಖಾನೆಯು ನೀಡಿರುತ್ತದೆ.
ಮೃತ ಕಾರ್ಮಿಕನ ಕುಟುಂಬಕ್ಕೆ ನಾಳೆ‌ ಚೆಕ್ ನೀಡಲಾಗುವುದು ಎಂದು ಕಾರ್ಮಿಕ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !!