ಬೆಳಗಾವಿ-16 : ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗಣಾಧೀಶ್ವರಕೊಪ್ಪ( ಗಣಿಕೊಪ್ಪ) ನ ಪೂರಾತಣ ಕಾಲದ ಶ್ರೀ ಶಿದ್ದೇಶ್ವರ ಜಾತ್ರಾ ಮೂತ್ಸವ ಹಾಗೂ ಮಕರ ಸಂಕ್ರಾತಿ ಹಬ್ಬವನ್ನು ಸಾರ್ಜಜನಕರು ಶ್ರೀ ಶಿದ್ದೇಶ್ವರ ದೇವಸ್ಥಾನದಲ್ಲಿ ಆಚರಿಸಿದರು.
ಗುರುವಾರ ಶ್ರೀ ಸಿದ್ದೇಶ್ವರ ದೇವಸ್ಥಾನಕ್ಕೆ ಗಣಿಕೊಪ್ಪ ಗ್ರಾಮ ಸುತ್ತಮುತ್ತಲಿನ ಸಾವಿರಾರು ಗ್ರಾಮಸ್ಥರು ಸೇರಿದಂತೆ ಬೆಳಗಾವಿ ಸುವರ್ಣಸೌಧದಿಂದ 11 ಕಿಮೀ ದೂರದಲ್ಲಿರು ಈ ದೇವಸ್ಥಾನಕ್ಕೆ ಸಾರ್ವಜನಿಕರು ಕುಟುಂಬ ಸಮೇತರಾಗಿ ಆಗಮಿಸಿದ್ದರು.

ಸಿದ್ದೇಶ್ವರನಿಗೆ ಎಳ್ಳು-ಬೆಲ್ಲ ಹಂಚಿ ಶುಭಾಶಯ ಕೋರಿದರು. ದೇವಸ್ಥಾನದ ಪಕ್ಕದಲ್ಲಿರುವ ಝರಿಯ ಗಂಗಾಮಾತೆಯನ್ನು ಪೂಜಿಸಿ, ನೈವೇದ್ಯ ಅರ್ಪಿಸಿದರು. ನಂತರ ಕುಟುಂಬ ಸಮೇತರಾಗಿ ಒಟ್ಟಿಗೆ ಕುಳಿತು ಹಬ್ಬದ ತರಹೇವಾರಿ ಆಹಾರವನ್ನು ಸೇವಿಸಿ ಸಂಕ್ರಾತಿ =ಹಬ್ಬವನ್ನು ವಿಜೃಂಭಣೆ ಯಿಂದ ಆಚರಣೆ ಮಾಡಿದರು.
