ಬೆಳಗಾವಿ-02- ರಾಮತೀರ್ಥನಗರ ದ ಕಾರ್ಯಸಿದ್ದಿ ಆಂಜನೇಯಸ್ವಾಮಿ ದೇವಸ್ಥಾನದ ೧ನೇ ಹಂತಕ್ಕೆ ಮತ್ತು ಪ್ರತೀಕ್ಷಾ ಹೋಟೆಲ್ ಹತ್ತಿರದ ೨ ನೇ ಹಂತಕ್ಕೆ ಕಡ್ಡಾಯವಾಗಿ ಇಲ್ಲಿಯ ಪ್ರಯಾಣಿಕರಿಗೆ ಎಲ್ಲ ಸಾರಿಗೆ ಬಸ್ಸುಗಳನ್ನು ವಿನಂತಿ ಮೇರೆಗೆ ನಿಲ್ಲಿಸಲೇಬೇಕು. ಎಂದು ರಾಮತೀರ್ಥನಗರ ದ ಧುರೀಣ, ಮಾಜಿ ಮೇಯರ್ ಎನ್ ಬಿ ನಿರ್ವಾಣಿ ಹೇಳಿದರು. ಅವರು ಬುಧವಾರ ಹಿರಿಯ ರಹವಾಸಿಗಳೊಂದಿಗೆ ಸಾರಿಗೆ ಸಂಸ್ಥೆಯ ಅಧೀಕ್ಷಕ ರಾದ ವಿಜಯಲಕ್ಷ್ಮಿ ಅವರಿಗೆ ವಿನಂತಿ ನಿಲುಗಡೆ ಕೋರಿಕೆಯ ಮನವಿ ಸಲ್ಲಿಸಿ ಮಾತನಾಡಿದರು. ೨೦೧೨ ರಲ್ಲಿ ಸಂಸದ ಸುರೇಶ ಅಂಗಡಿ ಅವರ ತೀವ್ರ ಆಸಕ್ತಿಯಿಂದಾಗಿ ಸಾರಿಗೆ ಸಂಸ್ಥೆ ೧ನೇ ಹಂತ ಮತ್ತು ೨ ನೇ ಹಂತಗಳಿಗೆ ಕಡ್ಡಾಯವಾಗಿ ಈ ಮಾರ್ಗದಲ್ಲಿ ಸಂಚರಿಸುವ ಎಲ್ಲ ವೇಗದೂತ, ತಡೆ ರಹಿತ ಮತ್ತು ಸಾಮಾನ್ಯ ಬಸ್ಸುಗಳಿಗೆ ನಿಲುಗಡೆಗೆ ಅಧಿಕ್ರತ ಆದೇಶವಿದ್ದು, ಸಿಬ್ಬಂದಿ ಮಾತ್ರ ಈ ಆದೇಶಕ್ಕೆ ಕವಡೆ ಕಿಮ್ಮತ್ತೂ ಕೊಡದೇ ಸುಮಾರು ವರ್ಷಗಳಿಂದ ಪ್ರಯಾಣಿಕರು ಮತ್ತು ಸಿಬ್ಬಂದಿ ಗಳ ನಡುವೆ ಸಂಘರ್ಷಗಳು ಜರುಗುತ್ತಲೇ ಇದ್ದು, ಇದಕ್ಕೆ ಇತಿಶ್ರೀ ಹಾಡಲೇ ಬೇಕು. ಹಿರಿಯ ಅಧಿಕಾರಿಗಳಿಗೆ ಈ ಕುರಿತು ಸೂಕ್ತ ಕ್ರಮಕ್ಕೆ ಆಗ್ರಹಿಸಿ ಹತ್ತಾರು ಬಾರಿ ಮನವಿಗಳನ್ನು ಕೊಟ್ಟಿದ್ದು, ಗಮನಾರ್ಹವಾಗಿದೆ. ಸೂಕ್ತ ಕ್ರಮ ಜರುಗಿಸದಿದ್ದರೆ ಬಸ ತಡೆದು ಪ್ರತಿಭಟಿಸುತ್ತೇವೆ ಎಂದು ಎಚ್ಚರಿಸಿದರು. ಮನವಿ ಸ್ವೀಕರಿಸಿದ ಅಧೀಕ್ಷಕರಾದ ವಿಜಯಲಕ್ಶ್ಮಿ ವಿಷಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಯಾಗದಂತೆ ಕ್ರಮ ವಹಿಸಲಾಗುವದು ಎಂದರು.
ಈ ಸಂದರ್ಭದಲ್ಲಿ ಧುರೀಣರಾದ ಆನಂದ ಕರಲಿಂಗನ್ನವರ, ಸಿ ಎಸ್ ಬಿಡ್ನಾಳ, ಸುರೇಶ ಉರಬಿನಹಟ್ಟಿ, ಮಂಜುನಾಥ ಪಾಟೀಲ, ಎನ್ ಬಿ ಹಣ್ಣಿಕೇರಿ, ಶಿವಾನಂದ ಮಠಪತಿ,
ಮಹಾದೇವ ಕೆಂಪಿಗೌಡ್ರ, ಡಿ ಕೆ ಭೂತಿ, ಈರಣ್ಣಾ ಅಂಗಡಿ, ಶಂಕರಗೌಡ ಪಾಟೀಲ, ವ್ಹಿ ಎ ಮೇಸ್ತ್ರಿ, ಅಡಿವೆಪ್ಪಾ ವಠಾರ, ಶಿವಾನಂದ ಗಡಾದ, ಈರಗೌಡಾ ಪಾಟೀಲ ,ಬಸವರಾಜ ಮಾದಗೌಡ ಸೇರಿದಂತೆ ರಾಮತೀರ್ಥನಗರ ದ ಹಿರಿಯರು ಹಾಜರಿದ್ದರು.
(ವರದಿ, ಆನಂದ ಕರಲಿಂಗನ್ನವರ)
