11/12/2025
IMG-20251023-WA0001

ಕನ್ನೇರಿ ಸ್ವಾಮೀಜಿ ಕ್ಷಮೆ ಕೇಳಬೇಕು – ಮಲ್ಲು ಗೋಡಿಗೌಡರ

 

ಮೂಡಲಗಿ-23 : ಬಸವಾಭಿಮಾನಿಗಳ ವಿರುದ್ಧ ಕನ್ನೆರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವಮಾನಕರ ಹೇಳಿಕೆ ನೀಡಿದ್ದು ಖಂಡನೀಯವಾಗಿದೆ . ಹಾಗಾಗಿ ಕೂಡಲೇ ಬಸವಪರ ಸ್ವಾಮೀಜಿಗಳಿಗೆ ಕ್ಷಮೆ ಕೇಳಬೇಕು ಎಂದು ಮಲ್ಲು ಗೋಡಿಗೌಡರ ಆಕ್ರೋಶ ವ್ಯಕ್ತಪಡಿಸಿದರು.
ಸೋಮವಾರ ರಂದು ಪಟ್ಟಣದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದವರು ಬಸವ ಸಂಸ್ಕೃತಿ ಅಭಿಯಾನವನ್ನು ಅಪಮಾನಿಸಿದ್ದಾರೆ ಅಲ್ಲದೆ, ಲಿಂಗಾಯಿತ ಮಠಾಧೀಶರ ವಿರುದ್ಧ ಅವಾಚ ಅಶ್ಲೀಲ ಪದ ಬಳಕೆ ಮಾಡಿದ್ದಾರೆ . ಒಬ್ಬ ಸ್ವಾಮೀಜಿಯಾಗಿ ಈ ರೀತಿ ಪದ ಬಳಕೆ ಮಾಡಿರೋದು ಖಂಡನೀಯ ಇದು ಲಿಂಗಾಯತ ಧರ್ಮೀಯರಿಗೆ ಹಾಗೂ ಬಸವಣ್ಣವರ ಅನುಯಾಯಿಗಳಿಗೆ ನೋವುಂಟು ಮಾಡಿದೆ ಎಂದರು.

IMG 20251022 125735 - IMG 20251022 125735
ದೀಪಕ್ ಝುಂಜರವಾಡ ಮಾತನಾಡಿ ಕನ್ನೆರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರ ಅವಹೇಳನಕಾರಿ ಹಾಗೂ ಪ್ರಚೋದನಾತ್ಮಕ ಹೇಳಿಕೆ ಸಮಾಜದಲ್ಲಿ ಶಾಂತಿ ಕದಡಿ ಕಾನೂನು ವ್ಯವಸ್ಥೆಗೆ ಧಕ್ಕೆ ಬರುವ ಸಂಭವಿದೆ ಅವರ ಮಠವೂ ಕೂಡಾ ಬಸವತತ್ವ ಅಡಿಯಲ್ಲಿ ಇದೆ ಅನ್ನೊದನ್ನ ಮರೆತು ಬಾಯಿ ಹೇಳಿಬಿಟ್ಟಿದ್ದಾರೆ. ಅವರ ಬುದ್ದಿಯಿಂದ ಆ ಮಾತುಗಳು ಬಂದಿಲ್ಲ ಅವರ ಹಿಂದೆ ಇನ್ಯಾರೋ ಕುತಂತ್ರಿಗಳು ಅವರ ಬಾಯಿಯಿಂದ ಈ ಮಾತುಗಳು ಬರುವ ಹಾಗೆ ಮಾಡಿದ್ದಾರೆ ಅವರು ಕೂಡಾ ಲಿಂಗಾಯತರಾಗಿದ್ದು ಲಿಂಗಾಯತರ ಸ್ವಾಮಿಜಿಗಳ ವಿರುದ್ಧವೇ ಆ ಕುತಂತ್ರಿಗಳು ಕುತಂತ್ರವನ್ನು ರೂಪಿಸಿದ್ದಾರೆ ಅದನ್ನು ಸ್ವಾಮಿಜಿಗಳು ಅರ್ಥೈಸಿಕೊಂಡಾದರು ಕೂಡಲೇ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.

error: Content is protected !!