11/12/2025
IMG-20250914-WA0001

ಬೆಳಗಾವಿ-14:ಶಿಕ್ಷಕರ ವೃತ್ತಿ ಪವಿತ್ರವಾದದ್ದು ಕಾಯಕ ತತ್ವದಡಿ ಸಮಾಜದ ಕಟ್ಟುವ ಗುರುತರ ಜವಾಬ್ದಾರಿ ಇರುವ ಶಿಕ್ಷಕ ವೃತ್ತಿಯ ಗೌರವ ಹೆಚ್ಚಿಸುವ ಜವಾಬ್ದಾರಿ ಪ್ರತಿಯೊಬ್ಬ ಶಿಕ್ಷಕನ ಕೈಯಲ್ಲಿದೆ. ಶಿಕ್ಷಣ ಎಂಬುದು ಎಲ್ಲವುಗಳನ್ನು ಮೆಟ್ಟಿನಿಂತು ಸಾಧನೆ ಮಾಡುವ ನಿಟ್ಟಿನಲ್ಲಿ ಶ್ರಮಿಸಿದಾಗ ಮಾತ್ರ ಅದರ ಫಲ ಸಿಗುತ್ತದೆ. ಎಂದು ಬೆಳಗಾವಿ ಗ್ರಾಮೀಣ ವಲಯದ ಬಿ ಆರ್ ಸಿ ಡಾ.ಮಹಾದೇವ ಮೇದಾರ ರವಿವಾರ ದಿ. 14 ರಂದು ಲಿಂಗಾಯತ ಸಂಘಟನೆ ವತಿಯಿಂದ ಹಮ್ಮಿಕೊಳ್ಳಲಾದ’ ಶಿಕ್ಷಕರ ದಿನಾಚರಣೆ ‘ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಉಪನ್ಯಾಸ ನೀಡಿದರು.ಗುರುಸಿದ್ದಪ್ಪ ರೇವಣ್ಣನವರ ದಾಸೋಹ ಸೇವೆಗೈದರು, ಸಪ್ಟಂಬರ್ ತಿಂಗಳು ಶಿಕ್ಷಕರಿಗೆ ವಿಶೇಷವಾದ ಗೌರವ ಆದರಗಳ ತಿಂಗಳು. ಎಷ್ಟೋ ಶಿಕ್ಷಕರು ಶ್ರಮವಹಿಸಿ ಮಕ್ಕಳ ಏಳಿಗೆಗಾಗಿ ದುಡಿದರೂ ಅವರಿಗೆ ಸಂದಬೇಕಾದ ಗೌರವ ಸನ್ಮಾನ ಈಗಿನ ಸಮಾಜದಲ್ಲಿ ಸಿಗುತ್ತಿಲ್ಲ. ಆ ನಿಟ್ಟಿನಲ್ಲಿ ತೆರೆಮರೆಯಲ್ಲಿ ಸೇವೆ ಗೈಯುತ್ತಿರುವ ಪ್ರತಿಭಾನ್ವಿತ ಶಿಕ್ಷಕರ ಸೇವೆ ಗುರುತಿಸಿ ಅವರನ್ನು ಲಿಂಗಾಯತ ಸಂಘಟನೆ ವತಿಯಿಂದ ಸನ್ಮಾನಿಸುತ್ತಿರುವುದು ನಿಜಕ್ಕೂ ಕಾಯಕ ನಿಷ್ಠೆಗೆ ಸಲ್ಲಿಸುತ್ತಿರುವ ಗೌರವ. ಆ ನಿಟ್ಟಿನಲ್ಲಿ ಶಿಕ್ಷಕರ ನಿಷ್ಠಾಪೂರಕ ಮನೋಧರ್ಮವು ವೃದ್ಧಿಯಾಗುವುದು ಎಂದರು. ಇದೇ ಸಂದರ್ಭದಲ್ಲಿ ಸಂಘಟನೆ ವತಿಯಿಂದ ಶಿಕ್ಷಣ ಇಲಾಖೆಯಲ್ಲಿ ವಿಶೇಷ ಸೇವೆಗೈಯುತ್ತಿರುವ ಡಾ. ಸುನಿಲ ಪರಿಟ್, ರಶ್ಮಿ ತಳೇಕರ್, ವಾಣಿಶ್ರೀ ಜೋಗಳೇಕರ,, ರೇವಕ್ಕ ಹತ್ತಿ, ಎಸ್ ಎಂ ನಾಶಿ,ಬಿ ಜಿ ಸೊಪ್ಪಿಮಠ, ಎಸ್ ಜಿ ಮಡಿವಾಳರ, ಎಂ ಬಿ ನಿಲಜಿ ರವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಶಿಕ್ಷಕಿ ವಾಣಿಶ್ರೀ ಜೋಗುಳೇಕರ್ ಮಾತನಾಡಿ ಕಾಯಕವೇ ಕೈಲಾಸ ಎಂದು ನಿಷ್ಠೆಯಿಂದ ಸೇವೆ ಮಾಡುತ್ತಿರುವ ನಮ್ಮಂತವರ ಸಾಧನೆ ಗಮನಿಸಿದ್ದು ನಿಜಕ್ಕೂ ನಮ್ಮ ಕಾಯಕ ನಿಷ್ಠೆಯನ್ನು ಇನ್ನಷ್ಟು ಹೆಚ್ಚಿಸುವಂತೆ ಮಾಡಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಈರಣ್ಣ ದೇಯನ್ನವರ ಮಾತನಾಡಿ ವೃತ್ತಿ ಗೌರವ ಹೆಚ್ಚಿಸುತ್ತಿರುವ ಶಿಕ್ಷಕರ ಸೇವೆ ಸದಾ ಸ್ಮರಣೀಯವಾದದ್ದು ಸಮಾಜ ಆರೋಗ್ಯಯುತವಾಗಿ ಇರಬೇಕಾದರೆ ಶಿಕ್ಷಕರ ನಿಷ್ಠೆಯ ಕಾಯಕವೂ ಸಹ ಪ್ರಮುಖವಾಗಿದೆ ಅದರ ಗೌರವವನ್ನು ಕಾಪಾಡುತ್ತಾ ಮುಂದೆ ಸಾಗಿ ಎಂದರು. ಕಾರ್ಯಕ್ರಮದಲ್ಲಿ ಸಂಘಟನೆಯ ಪ್ರಮುಖರಾದ ಅಶೋಕ ಇಟಗಿ, ಶಶಿಭೂಷಣ ಪಾಟೀಲ,ಸದಾಶಿವ ದೇವರ ಮನಿ, ಶಂಕರ ಗುಡಸ, ಆನಂದ ಕರಕಿ, ಬಸವರಾಜ ಕರಡಿಮಠ,ಪ.ಬ.ಕರಿಕಟ್ಟಿ,ಶಿವಪುತಯ್ಯ ಪೂಜಾರ,ಶೇಖರ ವಾಲಿಇಟಗಿ, ಬಸವರಾಜ ಬಿಜ್ಜರಗಿ,ಮಹಾದೇವ ಕೆ೦ಪಿಗೌಡರ, ಅಕ್ಕಮಹಾದೇವಿ ತೆಗ್ಗಿ, ಸುಶೀಲಾ ಗುರವ, ಕಮಲಾ ಗಣಾಚಾರಿ,ಶೋಭಾ ದೇಯನ್ನವರ, ವಿ. ಕೆ ಪಾಟೀಲ, ಸುರೇಶ ನರಗುಂದ, ಮಹಾಂತೇಶ ತೋರಣಗಟ್ಟಿ, ಶಿವಾನಂದ ನಾಯಕ, ಸೇರಿದಂತೆ ಶಿಕ್ಷಕರು ಉಪಸ್ಥಿತರಿದ್ದರು ಕಾರ್ಯಕ್ರಮದ ಆರಂಭದಲ್ಲಿ ಮಹಾದೇವಿ ಅರಳಿ ಪ್ರಾರ್ಥಿಸಿದರು. ಮಹಾಂತೇಶ ಮೆಣಸಿನಕಾಯಿ ಸ್ವಾಗತಿಸಿದರು ಶಿವಾನಂದ ತಲ್ಲೂರ ಪರಿಚಯಿಸಿದರು, ಸಂಗಮೇಶ ಅರಳಿ ನಿರೂಪಿಸಿದರು ವಚನಮಂಗಲದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

error: Content is protected !!