ಬೆಳಗಾವಿ-23: ನಗರದ ಶ್ರೀ ವೆಂಕಟೇಶ್ವರ ಸೇವಾ ಸಂಘದವರು ವಡಗಾವಿ ವೆಂಕಟೇಶ್ವರ ದೇವಸ್ಥಾನದಲ್ಲಿ ಇದೇ ದಿ. ೨೩ ಬುಧವಾರದಿಂದ ದಿ. ೨೭ ರವಿವಾರದ ವರೆಗೆ ಪ್ರತಿದಿನ ಸಾ. ೬ ಗಂಟೆಗೆ ಐದು ದಿನಗಳ ಕಾಲ
ಭಾಗವತ ಉಪನ್ಯಾಸವನ್ನು ಹಮ್ಮಿಕೊಂಡಿದ್ದಾರೆ. ಉಪನ್ಯಾಸಕರಾಗಿ ಶ್ರೀ ಸೋಸಲೆ ವ್ಯಾಸರಾಜ ಮಠದ ಪಂ. ಬ್ರಹ್ಮಣ್ಯಾಚಾರ್ಯರು ಆಗಮಿಸಲಿದ್ದಾರೆ. ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಬಳವಂತ ಬಿ. ದೇಶಪಾಂಡೆ ವಹಿಸಿಕೊಂಡಿದ್ದಾರೆ.
ಈ ಉಪನ್ಯಾಸದ ಸದುಪಯೋಗ ಪಡೆದುಕೊಂಡು ಹರಿವಾಯು ಗುರು ಹಿರಿಯರ ಅನುಗ್ರಹಕ್ಕೆ ಪಾತ್ರರಾಗುವಂತೆ ಕೇಶವ ಮಹುಲಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
