ಬೈಲಹೊಂಗಲ-೩೦: ಬ್ರೀಟಿಷ್ ಸಾಮ್ರಾಜ್ಯಕ್ಕೆ ಸಿಂಹಸ್ವಪ್ನವಾಗಿ ದೇಶದಲ್ಲಿಯೆ ಮೊದಲು ಸೋಲಿನ ರುಚಿ ತೋರಿಸಿದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರತಿ ವೀರ ರಾಣಿ ಕಿತ್ತೂರು ಚನ್ನಮ್ಮನವರ 196ನೇ ಸ್ಮರಣೋತ್ಸವವನ್ನು ಫೇ2 ರಂದು ಅರ್ಥಪೂರ್ಣವಾಗಿ ಆಚರಿಸೊಣ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿಗಳು ಹೇಳಿದರು.
ಪಟ್ಟಣದ ಗಣಾಚಾರಿ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಸಾನಿಧ್ಯವಹಿಸಿ ಮಾತನಾಡಿ, ಬೈಲಹೊಂಗಲ ಸ್ವಾತಂತ್ರ್ಯ ಹೋರಾಟಗಾರರ ನಾಡು, ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ, ಗುರಿಕಾರ ಅಮಟೂರು ಬಾಳಪ್ಪ, ಬಿಚಗತ್ತಿ ಚನ್ನಬಸಪ್ಪ, ವಡ್ಡರ ಯಲ್ಲಣ್ಣ ಒಂದು ಕಡೆಯಾದರೆ ಮತ್ತೊಂದು ಕಡೆ ಮಹಿಳಾ ಸೈನ್ಯ ಕಟ್ಟಿದ ಬೆಳವಡಿ ಮಲ್ಲಮ್ಮ ಹೀಗೆ ಅನೇಕ ಹೋರಾಟಗಾರರ ನಾಡಿನಲ್ಲಿ ಅವರ ಸ್ಮರಣೆ ಸದಾ ನಡೆಯುತ್ತಿರಬೇಕು. ರಾಣಿ ಚನ್ನಮ್ಮನವರ ತ್ಯಾಗ ಬಲಿದಾನವನ್ನು ಮುಂದಿನ ಪಿಳಿಗೆಗೆ ಒಯ್ಯುವ ಜವಾಬ್ದಾರಿ ನಮ್ಮಮೇಲಿದೆ. ಅವರ ಪುಣ್ಯಸ್ಮರಣೆಯನ್ನು ಯಾವುದೆ ಜಾತಿ ಜನಾಂಗಕ್ಕೆ ಹಚ್ಚದೆ ಈ ನಾಡಿನಲ್ಲಿರುವ ರಾಷ್ಟ್ರಮಾತೆಯ ಸ್ಮರಣೆಯನ್ನು ಅರ್ಥಪೂರ್ಣವಾಗಿ ಎಲ್ಲರೂ ಒಗ್ಗಟ್ಟಿನಿಂದ ಆಚರಿಸೊಣ. 200ನೇ ಕಿತ್ತೂರು ವಿಜಯೋತ್ಸವದಲ್ಲಿ ಸಂಸತ್ತಿನಲ್ಲಿರುವ ಚನ್ನಮ್ಮನವರ ಮೂರ್ತಿಗೆ ಸಂಸತ್ತಿನ ಅಧ್ಯಕ್ಷರಿಂದ ಪ್ರಥಮ ಬಾರಿಗೆ ಮಾಲಾರ್ಪಣೆ ಮಾಡಲಾಯಿತು.
ಉತ್ತರ ಭಾರತದಲ್ಲಿ ನಡೆಯುತ್ತಿರುವ ಕುಂಬಮೇಳದ ಸಂತಸಮ್ಮೇಳನದಲ್ಲಿ ಉತ್ತರ ಕರ್ನಾಟಕದ ಬಸವಣ್ಣ, ಚನ್ನಮ್ಮ ಕನಕದಾಸರ ಭಾವಚಿತ್ರ ನೋಡಿ ಹರ್ಷವಾಗಿದೆ. ಭಾರತವೇ ಇವರನ್ನು ಸ್ಮರಣೆ ಮಾಡುವಾಗ ಕರ್ನಾಟಕ ಸರ್ಕಾರ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆಯನ್ನು ಮರೆಯದೆ ಸರ್ಕಾರದ ಉತ್ಸವವಾಗಿ ಹೊರಹೊಮ್ಮಬೇಕೆಂದರು.
ಮಾಜಿ ಶಾಸಕ ಡಾ.ವಿ.ಆಯ್.ಪಾಟೀಲ ಮಾತನಾಡಿ, ನಮ್ಮ ನಾಡಿನ ಸ್ವಾತಂತ್ರ್ಯ ಹೋರಾಟಗಾರರನ್ನು ಜಾತಿಗೆ ಸೀಮಿತ ಮಾಡದೆ ಅವರ ಕೆಚ್ಚೆದೆಯ ಹೋರಾಟದ ಕ್ಷಾತ್ರತೇಜದ ಸಾಧನೆ ನಮ್ಮ ರಾಷ್ಟ್ರಾಧ್ಯಂತ ಪಸರಿಸುವ ರೀತಿಯಲ್ಲಿ ಆಚರಣೆಗಳಿರಬೇಕೆಂದರು.
ಮಾಜಿ ಜಿಪಂ ಸದಸ್ಯೆ ರೋಹಿಣಿ ಪಾಟೀಲ, ಶಂಕರ ಮಾಡಲಗಿ, ಮಹಾಂತೇಶ ತುರಮರಿ, ಮಹಾಂತೇಶ ಹೊಸಮನಿ, ಬಸವರಾಜ ತಿಗಡಿ ಮಾತನಾಡಿ 18 ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಚನ್ನಮ್ಮನವರ ಸ್ಮರಣೋತ್ಸವದಲ್ಲಿ ನಾಡಿನ ಚನ್ದಮನವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸೊಣ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ನ್ಯಾಯವಾದಿ ಶ್ರೀಶೈಲ ಬೊಳಣ್ಣವರ ಮಾತನಾಡಿ, ಫೇ2ರಂದು ಬೈಲಹೊಂಗಲ ಚನ್ನಮ್ಮನವರ ಐಕ್ಯಸ್ಥಳದಿಂದ 8ಘಂಟೆಗೆ ಕಾಕತಿಗೆ ತೆರಳಿ ಅಲ್ಲಿಂದ 9.30 ಘಂಟೆಗೆ ಬೆಳಗಾವಿ ಚನ್್ಮ ವೃತ್ತಕ್ಕೆ ಆಗಮಿಸಿ 11 ಘಂಟೆಗೆ ಬಾಗೆವಾಡಿ, 1ಘಂಟೆಗೆ ಕಿತ್ತೂರು, 2.30ಘಂಟೆಗೆ ಸಂಗೊಳ್ಳಿ 3.30ಕ್ಕೆ ಅಮಟೂರು 4ಘಂಟೆಗೆ ನಗರದ ಚನ್ನಮ್ಮನ ವೃತ್ತಕ್ಕೆ ಐಕ್ಯ ಜ್ಯೋತಿ ಯಾತ್ರೆ ಆಗಮಿಸಲಿದ್ದು ಈ ಎಲ್ಲ ಕಾರ್ಯಕ್ರಮಕ್ಕೆ ನಾಡಿನ ದೇಶಾಭಿಮಾನಿಗಳು ಆಗಮಿಸಬೇಕೆಂದರು.
ಇದೆ ಸಂದರ್ಭದಲ್ಲಿ ನೈರುತ್ಯ ರೈಲ್ವೆ ವಿಭಾಗದ ಬಳಕೆದಾರರ ಹಿತರಕ್ಷಣಾ ಸಮಿತಿಯ ಸದಸ್ಯರಾಗಿ ನಾಮನಿರ್ದೇಶನಗೊಂಡ ಎಪ್.ಎಸ್.ಸಿದ್ದನಗೌಡರ, ಜಿಲ್ಲಾ ಕೃಷಿಕ ಸಮಾಜದ ಉಪಾಧ್ಯಕ್ಷ ಗುರು ಮೆಟಗುಡ್, ಸವದತ್ತಿ ತಾಲೂಕಿನ ಕೃಷಿಕ ಸಮಾಜದ ಅಧ್ಯಕ್ಷ ಉಮೇಶ ಬೋಳೆತ್ತಿನ ಹಾಗೂ ದಡವಾಡ ಪಿಕೆಪಿಎಸ್ ಅಧ್ಯಕ್ಷ ನಿಂಗಪ್ಪ ಚೌಡಣ್ಣವರ ಅವರನ್ನು ಶ್ರೀಗಳು ಮತ್ತು ಸ್ಮರಣೋತ್ಸವ ಸಮಿತಿಯಿಂದಸತ್ಕರಿಸಲಾಯಿತು.
ವೇದಿಕೆಯ ಮೇಲೆ ಸಂಸ್ಥೆಯ ಅಧ್ಯಕ್ಷ ಬಿ.ಬಿ.ಗಣಾಚಾರಿ, ಜಿಲ್ಲಾ ಕೃಷಿಕ ಸಮಾಜದ ಉಪಾಧ್ಯಕ್ಷ ಗುರು ಮೆಟಗುಡ್, ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ ಸ್ಮರಣೊತ್ಸವದ ಮುಖಂಡ ಕುಮಾರ ದಳವಾಯಿ ಇದ್ದರು.
ಪೂರ್ವಭಾವಿ ಸಭೆಯಲ್ಲಿ, ಹಿರಿಯ ನ್ಯಾಯವಾದಿ, ಎಮ್ವಾಯ್.ಸೋಮಣ್ಣವರ, ಮಹಾಂತೇಶ ಮತ್ತಿಕೊಪ್ಪ, ಡಾ.ಸಿ.ಬಿ.ಗಣಾಚಾರಿ, ಮಹಾಂತೇಶ ಅಕ್ಕಿ, ಮಹಾಂತೇಶ ಹರಕುಣಿ, ರಫೀಕ ಬಡೆಗಾರ, ಬಿ.ಬಿ.ಬೋಗೂರ, ವಿಶ್ವನಾಥ ಪಾಟೀಲ, ಶಿವಾನಂದ ಬೆಳಗಾವಿ, ಮಹಾಂತೇಶ ಜಿಗಜಿನ್ನಿ, ಜಗದೀಶ ಲೋಕಾಪುರ, ಸಂಗಪ್ಪ ಕಾದ್ರೋಳ್ಳಿ, ನಾಗರಾಜ ಮರಕುಂಬಿ, ಮಹಾಂತೇಶ ಕಮತ, ಶಿವಬಸಪ್ಪ ತುರಮರಿ ಮಲ್ಲಿಕಾರ್ಜುನ ಹುಂಬಿ, ಗೌಡಪ್ಪ ಹೊಸಮನಿ, ಪರಪ್ಪ ಬಾಳಿಕಾಯಿ, ರವಿ ಕುರಬೆಟ್ಟ, ರಮೇಶ ತುರಮರಿ, ಶ್ರೀಕಾಂತ್ ಸುಂಕದ, ಕುಮಾರ ಪಾಟೀಲ, ಜಿ.ಬಿ.ಶಿಗಿಹಳ್ಳಿ, ಈರಣ್ಣ ಬೆಟಗೇರಿ, ಬಿ.ಬಿ.ಸಂಗನಗೌಡರ, ಶ್ರೀಶೈಲ ಶರಣಪ್ಪನವರ, ಶ್ರೀಕಾಂತ ಮಾಳಕ್ಕನ್ನವರ, ಮಹೇಶ ಕೊಟಗಿ, ಚಂದ್ರು ಕೊಪ್ಪದ, ಸುರೇಶ ಯರಗಟ್ಟಿ, ಸುಭಾಷ ತುರಮರಿ, ರಾಜು ನರಸಣ್ಣವರ, ರಾಜು ಗುಂಡ್ಲೂರ, ರೀತಿಷ ಪಾಟೀಲ, ಅಜ್ಜಪ್ಪ ಹೊಸೂರ, ಈಶ್ವರ ಕೊಪ್ಪದ, ಬಸವರಾಜ ದೋತರ, ನಾಗರಾಜ ಬುಡಶೆಟ್ಟಿ, ಈರಣ್ಣ ಜವಳಿ, ಅಶೋಕ ಬೊರಕನವರ, ಮುದಕಪ್ಪ ತೊಟಗಿ, ಸದಾಶಿವ ಪಾಟೀಲ, ಸಂತೋಷ ಕೊಳವಿ, ಚಂದನ ಕೊಳವಿ, ಶಿವು ಶಿರಸಂಗಿ, ರಾಮು ರಜಪೂತ ಸೇರಿದಂತೆ ನುರಾರು ಜನ ಇದ್ದರು.
ಸ್ಮರಣೊತ್ಸವ ಸಂಚಾಲಕ ಎಫ್.ಎಸ್.ಸಿದ್ದನಗೌಡರ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು.
ಪ್ರಧಾನ ಕಾರ್ಯದರ್ಶಿ ಮಹೇಶ ಹರಕುಣಿ ಸ್ವಾಗತಿಸಿದರು. ಸ್ಮರಣೋತ್ಸವ ಸಮಿತಿ ಅಧ್ಯಕ್ಷ ಮುರಿಗೆಪ್ಪ ಗೂಂಡ್ಲೂರ ವಂದಿಸಿದರು.
