10/04/2025
IMG-20241230-WA0027

ಬೆಳಗಾವಿ-೩೦:ಸುಕ್ಷೇತ್ರ ಉಳವಿ ಶ್ರೀ ಚನ್ನಬಸವೇಶ್ವರ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ನಿರಂತರವಾಗಿ ದರ್ಶನ ಪಡೆಯಲು ಬರುವಂತದಾಗಿದ್ದು, ಪ್ರತಿವರ್ಷ ಜರುಗುವ ಬಹುದೊಡ್ಡ ಅಸಂಖ್ಯಾತ ಸದ್ಭಕ್ತರು ಪಾದಯಾತ್ರೆಯ ಹಾಗೂ ಚಕ್ಕಡಿ ಬಂಡಿ ಮುಖಾಂತರ ದರ್ಶನ ಪಡೆಯಲು ಹೋಗುತ್ತಾರೆ.

ಈ ವರ್ಷ ಬಾರೀ ಮಳೆಯಿಂದಾಗಿ ಸದರಿ ಮಾರ್ಗದ ರಸ್ತೆ ಪೂಟೋಳ್ಳಿ ಕ್ರಾಸನಿಂದ ಗುಂದ ಮಾರ್ಗವಾಗಿ ದೇವಸ್ಥಾನದ ವರೆಗೆ ರಸ್ತೆ ದುರಸ್ಥಿಯಾಗಿ ಪ್ರವಾಸಿಗರಿಗೆ ತುಂಬಾ ತೊಂದರೆಯಾಗುತ್ತಿದೆ.

ಸದರಿ ಈ ಮಾರ್ಗದ ರಸ್ತೆ ಸುಧಾರಣೆ ಶೀಘ್ರಗತಿಯಲ್ಲಿ ನಡೆಸಲು ಆದೇಶ ನೀಡಬೇಕು ಎಂದು ಡಿಸೇಂಬರ್. 24 ರಂದು ಲೋಕಪಯೋಗಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರಿಗೆ ಸಮಸ್ತ ಉತ್ತರ ಕರ್ನಾಟಕದ ಜನರ ಪರವಾಗಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ದೀಪಕ ಗುಡಗನಟ್ಟಿ ಅವರ ಕಡೆಯಿಂದ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ರಾಜು ಕುಡಸೋಮಣ್ಣವರ,ಶಿವಾನಂದ ತಂಬಾಕೆ,ರಾಜು ಸೊಗಲದ ಗಂಗಾರಾಮ ಶಿಗ್ಗಿಹಳ್ಳಿ,ರಮೇಶ ಯರಗಣ್ಣವರ,ಬಸವರಾಜ ಬೊಳಗೌಡರ,ಜಗದೀಶ ಮಾಳಗಿ ಉಪಸ್ಥಿತಿರಿದ್ದರು.

error: Content is protected !!