ಬೆಳಗಾವಿ-29:ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಭವನ ಮಹಾಂತೇಶ ನಗರ ಲಿಂಗಾಯತ ಸಂಘಟನೆ ಬೆಳಗಾವಿಯಲ್ಲಿ ದಿನಾಂಕ.28.09.2025.ರಂದು ಸಾಮೂಹಿಕ ಪ್ರಾರ್ಥನೆ ವಚನ ವಿಶ್ಲೇಷಣೆ, ವಚನಸಾಹಿತ್ಯ ಕುರಿತು ಶರಣ ಸಿದ್ದಣ್ಣಾ ಅ ಇಟಗಿ ಅವರಿಂದ ಉಪನ್ಯಾಸ ಜರುಗಿತು.ಪ್ರಾರಂಭದಲ್ಲಿ ಅಕ್ಕಮಹಾದೇವಿ ತೆಗ್ಗಿ,ವಿ ಕೆ ಪಾಟೀಲ,ಬಸವರಾಜ ಬಿಜ್ಜರಗಿ,ಮಹದೇವ ಕೆ೦ಪಿಗೌಡರ,ಸುವಣಾ೯ಗುಡಸ, ಜಯಶ್ರೀ ಚಾವಲಗಿ,ಶಿವಾನಂದ ತಲ್ಲೂರ, ಶಂಕರ ಗುಡಸ,ಶರಣಶರಣೆಯರು ವಚನ ವಿಶ್ಲೇಷಣೆ ಮಾಡಿದರು. ವಚನ ಸಾಹಿತ್ಯವು ಕೇವಲ ಧಾರ್ಮಿಕ ಗ್ರಂಥವಲ್ಲ ಬದಲಾಗಿ 12 ಶತಮಾನದಲ್ಲಿ ಕನ್ನಡ ಸಮಾಜದಲ್ಲಿ ನೈತಿಕ ಮತ್ತು. ಆಧ್ಯಾತ್ಮಿಕ ಪರಿವರ್ತನೆ ತಂದ ಒಂದು ಬೃಹತ್ ಚಳುವಳಿಯಾಗಿದೆ.ಇದು ಕಾಯಕಕ್ಕೆಒತ್ತು ನೀಡಿ ಜಾತಿ ಲಿಂಗ,ತಾರತಮ್ಯ ವಿರುದ್ಧ ಹೋರಾಡಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು ಎಲ್ಲರಿಗೂ ಅರ್ಥವಾಗುವ ಭಾಷೆಯಲ್ಲಿ ಸಂದೇಶಗಳನ್ನು ನೀಡಿತು. ವಚನ ಎಂಬುದಕ್ಕೆ ಮಾತು ಮತ್ತು ‘ಭಾಷೆ’ ಎಂಬ ಸಾಮಾನ್ಯ ಅರ್ಥಗಳಿವೆ. ವಚನ ಕನ್ನಡದೆ ಆದ ಸಾಹಿತ್ಯ ಪ್ರಕಾರ ,ಶರಣರ ಪ್ರಕಾರ ಅನುಭವ ಅನಿಸಿಕೆ ವಿಚಾರಗಳ ವಿಶಿಷ್ಟ ಅಭಿವ್ಯಕ್ತಿ.ಎಂದು ತಿಳಿಸಿದರು ಅಧ್ಯಕ್ಷತೆಯನ್ನು ಶರಣ ಈರಣ್ಣಾ ದೇಯಣ್ಣವರ ವಹಿಸಿದ್ದರು.ದಾಸೋಹ ಸೇವೆಯನ್ನು ಶರಣ ಅಶೋಕ ಇಟಗಿಯವರು ಸೇವೆಗೈದರು.ಮಹಾಂತೇಶ ಮೆಣಸಿನಕಾಯಿ ಅತಿಥಿಗಳನ್ನು ಪರಿಚಯಿಸಿದರು.ಆನಂದ ಕರಕಿ,ಗುರುಸಿದ್ದ ರೇವಣ್ಣವರ,ಪ.ಬ.ಕರಿಕಟ್ಟಿ,ಲಕ್ಷ್ಮಣಕು೦ಬಾರ,ಮ.ಬ.ಕಾಡೆ, ಬಾಬಣ್ಣ ತಿಗಡಿ,ಶ೦ಕರ ರಾವಳ,ಶರಣ ಶರಣೆಯರು ಉಪಸ್ಥಿತರಿದ್ದರು ಸುರೇಶ ನರಗುಂದ ಸವ೯ರನ್ನು ಸ್ವಾಗತಿಸಿದರು.ಸಂಗಮೇಶ ಅರಳಿ ನಿರೂಪಿಸಿದರು.ಮಂಗಲದೊಂದಿಗೆ ಮುಕ್ತಾಯಗೊಂಡಿದೆ.
