11/12/2025
IMG-20250919-WA0001

ಕೌಜಲಗಿ-19 : ಪಟ್ಟಣದ ಗ್ರಾಮ ಪಂಚಾಯತ ಗ್ರಂಥಾಲಯಕ್ಕೆ ದಾನಿಗಳು ಸುಮಾರು 55 ಸಾವಿರ ರೂಗಳ ಪುಸ್ತಕಗಳನ್ನು ಬುಧವಾರ ದೇಣಿಗೆಯಾಗಿ ನೀಡಿದ್ದಾರೆ.
ಪಟ್ಟಣದ ಗ್ರಂಥಾಲಯದಲ್ಲಿ ಇಲ್ಲಿಯ ಕನಕ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ. ರಾಜೇಂದ್ರ ಸಣ್ಣಕ್ಕಿ ನಿರ್ದೇಶನದ ಮೇರೆಗೆ ಸಂಸ್ಥೆಯ ಆಡಳಿತ ಅಧಿಕಾರಿ ಮಂಜುನಾಥ ಸಣ್ಣಕ್ಕಿ ಅವರು 32500 ರೂಗಳ ವೆಚ್ಚದಲ್ಲಿ ಉದ್ಯೋಗ ಆಕಾಂಕ್ಷೆಯುಳ್ಳ ಅಭ್ಯರ್ಥಿ ಓದುಗರಿಗೆ ಸಹಾಯಕವಾಗಲೂ ಸ್ಪರ್ಧಾತ್ಮಕ ಪುಸ್ತಕಗಳನ್ನು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಹಸ್ತಾಂತರಿಸಿದರು.
ಇನ್ನೋರ್ವ ದಾನಿಗಳಾದ ಸ್ಥಳೀಯ ಡಾ. ಮಹಾದೇವಪ್ಪ ಮಡ್ಡೆಪ್ಪ ದಳವಾಯಿ ಪ್ರೌಢಶಾಲೆಯ ಧರ್ಮದರ್ಶಿ ಅರವಿಂದ್ ದಳವಾಯಿ ಅವರ ನಿರ್ದೇಶನದ ಮೇರೆಗೆ ವಸಂತ ದಳವಾಯಿ ಮತ್ತು ಶಾಲೆಯ ಮುಖ್ಯೋಪಾಧ್ಯಾಯ ವಿವೇಕ ಹಳ್ಳೂರ ಜಂಟಿಯಾಗಿ 22500 ರೂಗಳ ವೆಚ್ಚದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾಗುವ ಪುಸ್ತಕಗಳನ್ನು ದೇಣಿಗೆಯಾಗಿ ನೀಡಿದರು.
ಅರ್ಬನ್ ಬ್ಯಾಂಕ್ ಅಧ್ಯಕ್ಷ ನೀಲಪ್ಪ ಕೇವಟಿ, ಮಂಜುನಾಥ ಸಣ್ಣಕ್ಕಿ ಮತ್ತು ಮುಖ್ಯೋಪಾಧ್ಯಾಯ ವಿವೇಕ ಹಳ್ಳೂರ ಮಾತನಾಡಿ, ಪಟ್ಟಣದ ಯುವ ಓದುಗರು ಪುಸ್ತಕಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ದಾನಿಗಳಿಂದ ಕೊಡುಗೆಯಾಗಿ ನೀಡಿದ ಪುಸ್ತಕಗಳನ್ನು ಗ್ರಾಪಂ ಅಧ್ಯಕ್ಷರ ಪರವಾಗಿ ರಾಮಣ್ಣ ಈಟಿ ಮತ್ತು ಪಿಡಿಒ ಪರಶುರಾಮ ಇಟಗೌಡರ ಸ್ವೀಕರಿಸಿ ಗ್ರಂಥಾಲಯದ ಸಹಾಯಕರಿಗೆ ಹಸ್ತಾಂತರಿಸಿದರು. ಕೌಜಲಗಿ ಗ್ರಾಮ ಪಂಚಾಯತ ವತಿಯಿಂದ ಪುಸ್ತಕದಾನಿಗಳನ್ನು ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಗ್ರಾಪಂ ಅಧ್ಯಕ್ಷರಾದ ಅಶೋಕ ಉದ್ದಪ್ಪನವರ, ಶಿವಪ್ಪ ಭಜಂತ್ರಿ, ಅರ್ಬನ ಬ್ಯಾಂಕ್ ಅಧ್ಯಕ್ಷ ನೀಲಪ್ಪ ಕೇವಟಿ, ಗ್ರಾಪಂ ಸದಸ್ಯ ಬಸಪ್ಪ ತಳವಾರ, ತಾಪಂ ಮಾಜಿ ಸದಸ್ಯ ಶಾಂತಪ್ಪ ಹಿರೇಮೇತ್ರಿ, ಹಿರಿಯರಾದ ಮಲ್ಲಪ್ಪ ದಳವಾಯಿ, ವಸಂತ ದಳವಾಯಿ, ಅಶೋಕ ಪೂಜೇರಿ ಸಾಹಿತಿ ಡಾ.ರಾಜು ಕಂಬಾರ ಸೇರಿದಂತೆ ಗ್ರಾಪಂ ಸಿಬ್ಬಂದಿ, ಶಿಕ್ಷಕರು, ಯುವಕರು, ಗ್ರಂಥಾಲಯ ಸಿಬ್ಬಂದಿ ಹಾಜರಿದ್ದರು.

error: Content is protected !!