ಬೆಳಗಾವಿ-24:18-8-2025 ಎಚ್ ಡಿ ಕುಮಾರಸ್ವಾಮಿ ಬಡಾವಣೆ ಬೆಳಗಾವಿಯ
ಶಿವಾಲಯದಲ್ಲಿ ಕೊನೆಯ ಶ್ರಾವಣ ಸೋಮವಾರದ ಅಂಗವಾಗಿ ಬಡಾವಣೆಯ ರಹವಾಸಿಗಳ ಸಂಘ ಶಿವಾಲಯ ಸೇವಾ ಸಮಿತಿ ಸಂಘದ ಸಂಯುಕ್ತ ಆಶ್ರಯದಲ್ಲಿ ಅಧ್ಯಾತ್ಮಿಕ ಚಿಂತನ ಶಿಬಿರವನ್ನು ಏರ್ಪಡಿಸಲಾಗಿತ್ತು.
ಈ ವೇದಾಂತ ಚಿಂತನ ಸಭೆಯ ಗೌರವ ಅಧ್ಯಕ್ಷತೆಯನ್ನು, ಬಡಾವಣೆಯ ರಹವಾಸಿಗಳ ಸಂಘದ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ರುದ್ರಣ್ಣ ಚಂದರಗಿ ಇವರು ವಹಿಸಿ ಭಕ್ತ ಜನರನ್ನು ಹಾಗೂ ರಹವಾಸಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ನಮ್ಮ ಬಡಾವಣೆಯಲ್ಲಿ ಅನೇಕ ಸಂಘ ಸಂಸ್ಥೆಗಳು ಇದ್ದು ಎಲ್ಲ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಹಾಗೂ ಎಲ್ಲ ರಹವಾಸಿಗಳ ಸಹಕಾರದಲ್ಲಿ ಹಾಗೂ ಸ್ಥಳೀಯ ಮಾನ್ಯ ಶಾಸಕರ ಸಹಕಾರದೊಂದಿಗೆ ಬಡಾವಣೆಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುತ್ತವೆ ಈ ಬಡಾವಣೆಯ ಸರ್ವಾಂಗೀನ ಅಭಿವೃದ್ಧಿ ಕುರಿತು ಎಲ್ಲರೂ ಶ್ರಮಿಸೋಣ ಈ ನಮ್ಮ ಬಡಾವಣೆಯನ್ನು ಬೆಳಗಾವಿ ಪಟ್ಟಣದಲ್ಲಿ ಅತ್ಯುತ್ತಮ ಸೌಕರ್ಯದ ಬಡಾವಣೆ ಅಂತ ಗುರುತಿಸುವಂತೆ ಮಾಡೋಣ ಅಂತ ಎಲ್ಲರಲ್ಲಿ ವಿನಂತಿಸಿದರು
ಶಿವಾಲಯದ ಸೇವಾ ಸಮಿತಿಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಬಿ ಐ ಪಾಟೀಲ ಇವರು ಈ ವೇದಾಂತ ಸಭೆಯ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡು ಮಾತನಾಡಿ, ಈ ವರ್ಷ ಶ್ರಾವಣ ಮಾಸದಲ್ಲಿ ನಾಲ್ಕು ಶ್ರಾವಣ ಸೋಮವಾರಗಳು ಬಂದಿದ್ದು ಪ್ರತಿ ಸೋಮವಾರದಂದು ಒಬ್ಬೊಬ್ಬ ಸಾಧಕರಿಂದ ಪ್ರವಚನ ಏರ್ಪಡಿಸಲಾಗಿತ್ತು ಹಾಗೂ ನಮ್ಮ ಬಡಾವಣೆಯ ಜನರಲ್ಲಿ ಭಕ್ತಿ ಭಾವ ಉಂಟು ಮಾಡುವಲ್ಲಿ ನಾವು ಯಶಸ್ವಿಯಾಗಿರುತ್ತೇವೆ ಅದಕ್ಕೆ ಬಡಾವಣೆಯ ಎಲ್ಲಾ ನಾಗರಿಕರ ಸಹಕಾರವೇ ಕಾರಣ ಇನ್ನು ಮುಂದೆ ಆದರೂ ಕೂಡಾ ಎಲ್ಲರೂ ಒಗ್ಗಟ್ಟಿನಿಂದ ಇದ್ದು ಶಿವಾಲಯದಲ್ಲಿ ಆಧ್ಯಾತ್ಮಿಕ ಚಿಂತನ ನಡೆಸೋಣ ಅಂತ ತಿಳಿಸಿದರು
ಈ ಒಂದು ಆಧ್ಯಾತ್ಮಿಕ ಚಿಂತನದಲ್ಲಿ ಬೈಲಹೊಂಗಲ ತಾಲೂಕಿನ ಬೈಲವಾಡ ವರ್ತಿ ಶ್ರೀ ಕ್ಷೇತ್ರದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶಂಕರ ದೇವರು, ಆಶೀರ್ವಚನ ನೀಡುತ್ತಾ ಶ್ರಾವಣ ಮಾಸದ ಈ ಒಂದು ತಿಂಗಳ ಪರ್ಯಂತರ ಭಗವಂತನ ನಾಮಸ್ಮರಣೆ ಆತನ ಲೀಲೆಗಳ ಬಗ್ಗೆ ಹಾಗೂ ಅನೇಕ ಮಹಾತ್ಮರ ಪುರಾಣಗಳನ್ನು ಆಲಿಸಿ ತಮ್ಮ ಜೀವನವನ್ನು ಕೃತಾತರನ್ನಾಗಿ ಮಾಡಿಕೊಳ್ಳೋದು ಈ ಶ್ರಾವಣ ಮಾಸದ ಉದ್ದೇಶ ಇರುತ್ತದೆ ಅಂತಾ ತಿಳಿಸಿದರು
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬಡಾವಣೆಯ ಪಂಚ ಕಮಿಟಿಯ ಅಧ್ಯಕ್ಷರಾದ ಶ್ರೀ ಅರವಿಂದ ಜೋಶಿ ಉಪಸ್ಥಿತರಿದ್ದರು
ಬಡಾವಣೆಯ ಸರಕಾರಿ ನ್ಯಾಯವಾದಿಗಳಾದ ಶ್ರೀ ಉಮೇಶ ಪಾಟೀಲ ಇವರು ಪೂಜ್ಯರವರ ಪರಿಚಯ ನೀಡಿದರು
ಬಡಾವಣೆಯ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ವ್ಹಿ ಜಿ ನೀರಲಗಿಮಠ, ಶ್ರೀ ಮಹದೇವ ಹೊಂಗಲ, ಶ್ರೀ ಯಲ್ಲಪ್ಪ ಪಾಟೀಲ, ಶ್ರೀ ಶಿವಪುತ್ರ ಫಟಕಳ,ಶ್ರೀ ಶ್ರೀಧರ ಕುಲಕರ್ಣಿ, ಶ್ರೀ ಪಟ್ಟಣಶೆಟ್ಟಿ, ಶ್ರೀ ಎಸ್. ಸಿ.ಗಂಗಾಪೂರ, ಶ್ರೀ ಸಂಗೊಳ್ಳಿ ಸರ್, ಶ್ರೀ ಸೋಮಶೇಖರ ಬೋಸಲೆ ,ಶ್ರೀ ಕೃಷ್ಣ ಹಂದಿಗುಂದ ಇತ್ಯಾದಿ ಮಹನೀಯರು ಹಾಗೂ ಮಹಿಳಾ ಸಂಘದ ಸದಸ್ಯರಾದ ಶ್ರೀಮತಿ ಶೋಭಕ್ಕ ಹೊಸಮಠ, ಶ್ರೀಮತಿ ರೇಣುಕಾ ಜಾಧವ, ಶ್ರೀಮತಿ ಸುಧಾ ರೊಟ್ಟಿ, ಇತ್ಯಾದಿ ಅನೇಕಮಹಿಳೆಯರು ಉಪಸ್ಥಿತರಿದ್ದರು.ಶ್ರೀ ಮಹದೇವ ಹೊಂಗಲ ಇವರು ಕಾರ್ಯಕ್ರಮ ನಿರೂಪಣೆ ಮಾಡಿದರು ಮಹಾಪ್ರಸಾದದೊಂದಿಗೆ ಕಾರ್ಯಕ್ರಮವನ್ನು ಸಾಂಗಗೊಳಿಸಲಾಯಿತು.
